`ಸಂತೆಯಲ್ಲಿ ನಿಂತ ಕಬೀರ` ಈ ವಾರ ತೆರೆಗೆ
Posted date: 25 Mon, Jul 2016 – 08:48:23 AM

ಅಂದು 1962 ಡಾ ರಾಜಕುಮಾರ್ ಅವರು ‘ಮಹಾತ್ಮ ಕಭೀರ’ ಇಂದು 2016 ಡಾ ಶಿವರಾಜಕುಮಾರ್ ಅವರು ‘ಸಂತೆಯಲ್ಲಿ ನಿಂತ ಕಭೀರ’.

54 ವರ್ಷಗಳ ನಂತರ ‘ಕಭೀರ’ ಸ್ಮರಣೆ ಜೋರಾಗೆ ನಡೆಯುತ್ತಿದೆ. ಭಕ್ತಿ ಪ್ರದಾನವಾಗಿ ಅಲ್ಲದೆ 15 ಶತಮಾನದ ಸಂತ ‘ಕಭೀರ’ನನ್ನು ಇಂದಿನ ಕಾಲ ಘಟ್ಟಕ್ಕೆ ತಂದು ಒಂದು ಮಹೋನ್ನತ ಸಿನಿಮಾ ಆಗಿ ನೀಡಿದ್ದಾರೆ ನಿರ್ದೇಶಕ ಇಂದ್ರ ಬಾಬು (ನರೇಂದ್ರ್ ಬಾಬು). ಹಿಂದಿಯಲ್ಲಿ ರಚನೆ ಮಾಡಲಾದ ನಾಟಕ ಭೀಷ್ಮ ಸಾಹ್ನಿ ಅವರ ಕೃತಿಯನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ಅಳವಡಿಸಿ ನೀಡಿದ್ದಾರೆ ನುರಿತ ಬರಹಗಾರ ಗೋಪಾಲ ವಾಜಪೇಯಿ.

ಪ್ರಾದೇಶಿಕ ಸೆನ್ಸಾರ್ ಮಂಡಳಿ  ಈ ಸಿನಿಮಾಕ್ಕೆ ಐತಿಹಾಸಿಕ ಸಿನಿಮಾ ಎಂದು ಪ್ರಮಾಣ ಪತ್ರ ನೀಡಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. ಶಾಂತಿ, ಸಹಬಾಳ್ವೆ, ಮಾನವೀಯತೆ ಗುಣಗಳನ್ನು ಸಾರುವ ಸಿನಿಮಾ ಇಂದಿನ ಸಮಾಜಕ್ಕೂ ಬಹಳ ಸೂಕ್ತ ಎಂದು ನಿರ್ಮಾಪಕ ಕುಮಾರಸ್ವಾಮಿ ಅವರು ಅಭಿಪ್ರಾಯ ಪಡುತ್ತಾರೆ.

ಬಹಳ ಉತ್ಸಾಹದಿಂದ ನಿರ್ದೇಶನ ಮಾಡಿರುವ ರಾಜ್ಯ ಪ್ರಶಸ್ತಿ ವಿಜೇತ ‘ಕಬ್ಬಡ್ಡಿ’ ಸಿನಿಮಾದ ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾ ಇಂದ ಇಂದ್ರ ಬಾಬು ಆಗಿದ್ದಾರೆ. ೪೮ ದಿವಸಗಳ ಕಾಲ ಅವರು ನವೀನ್ ಕುಮಾರ್ ಐ ಅವರ ಛಾಯಾಗ್ರಹಂದಲ್ಲಿ ಬೆಂಗಳೂರು, ಕೆ ಆರ್ ಎಸ್ ಹಿನ್ನೀರು, ಚಿಕ್ಕಮಗಳೂರು ಹಾಗೂ ಚಾಲಾಕುಡಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಕಳೆದ 15 ವರ್ಷಗಳಿಂದ ಹಿಂದಿ ಸಿನಿಮಾ ರಂಗದಲ್ಲಿ ದೇವದಾಸ್, ದಿವಾಂಗಿ, ಹಮ್ ದಿಲ್ ದೇ ಚುಕೆ ಸನಮ್....ಹಾಗೂ ಇನ್ನಿತರ ಸಿನಿಮಾಗಳಿಗೆ ಸಂಗೀತ ನೀಡಿರುವ ಇಸ್ಮೈಲ್ ದರ್ಬಾರ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಸಂತ ಕಭೀರರ ‘ದೋಹಾ’ ಮುಖ್ಯವಾಗಿ ಬಳಸಲಾಗಿದೆ. ಐದು ಹಾಡುಗಳು ಹಾಗೂ ನಾಲ್ಕು ದೋಹಗಳು ರಜತ ಪರದೆಯಲ್ಲಿ ಆಕರ್ಷಿಸಲಿದೆ.

ಗೋಪಾಲ ವಾಜಪೇಯಿ ಅವರ ಗೀತ ಸಾಹಿತ್ಯ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ವಿಶ್ವ ಈ ಚಿತ್ರದ ಸಂಕಲನಕಾರರು. ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸುಬ್ರಮಣ್ಯ ಪ್ರೊಡಕ್ಷನ್ ಅಡಿಯಲ್ಲಿ ಹೊಸಪೇಟೆಯ ಕುಮಾರಸ್ವಾಮಿ ಪತ್ತಿಕೊಂಡ ನಿರ್ಮಾಣದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್,ದತ್ತಣ್ಣ, ಅವಿನಾಷ್, ಅನಂತ್ ನಾಗ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಸಂಜನಾ, ವೈಶಾಲಿ ದೀಪಕ್, ಶೋಭಿನ, ಪ್ರಶಾಂತ್ ಸಿದ್ದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed